Free Borewell Scheme : ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತ 3.50 ಲಕ್ಷ ಪಡೆಯಲು ಅರ್ಜಿ ಹೀಗೆ ಸಲ್ಲಿಸಿ

Published On: October 31, 2025
Follow Us
ganga-kalyana-free-borewell-scheme

ನಮಸ್ಕಾರ ಸ್ನೇಹಿತರೆ, ಇಂದು ನಾವು ತಿಳಿಸುತ್ತಿರುವುದು ರೈತರ ಬದುಕನ್ನು ಬದಲಾಯಿಸುವ ಮಹತ್ವದ ಯೋಜನೆ ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023 ಬಗ್ಗೆ. ಈ ಯೋಜನೆಯಡಿ ಸರ್ಕಾರವು ಬೋರ್‌ವೆಲ್ ಕೊರೆಸಲು ರೂ. 4 ಲಕ್ಷದ ಸಹಾಯಧನ ನೀಡುತ್ತಿದೆ. ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ಜಾರಿಗೆ ತರಲಾಗಿದೆ.

ಗಂಗಾ ಕಲ್ಯಾಣ ಯೋಜನೆ ಎಂದರೇನು?

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ರಾಜ್ಯ ಸರ್ಕಾರವು ಕೃಷಿಕರ ಸಹಾಯಕ್ಕೆ ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ಸರ್ಕಾರ ರೈತರಿಗೆ ಬೋರ್‌ವೆಲ್‌, ತೆರೆದ ಬಾವಿ ಮತ್ತು ಪಂಪ್‌ಸೆಟ್‌ಗಳ ವ್ಯವಸ್ಥೆ ಮಾಡುತ್ತದೆ. ನೀರಿನ ಕೊರತೆಯಿಂದ ಕೃಷಿ ನಿಲ್ಲಿಸಬೇಕಾದ ರೈತರು ಇದೀಗ ಈ ಯೋಜನೆಯಿಂದ ತಮ್ಮ ಹಳ್ಳಿಯಲ್ಲೇ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ.

ಎಷ್ಟು ಸಹಾಯಧನ ಸಿಗುತ್ತದೆ?

  • ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮತ್ತು ತುಮಕೂರು ಜಿಲ್ಲೆ ರೈತರಿಗೆ – ರೂ.4 ಲಕ್ಷ ಸಹಾಯಧನ
  • ಉಳಿದ ಜಿಲ್ಲೆಗಳ ರೈತರಿಗೆ – ರೂ.3 ಲಕ್ಷ ಸಹಾಯಧನ
  • ಬೋರ್‌ವೆಲ್‌ ಪಂಪ್‌ ಪೂರೈಕೆ ಮತ್ತು ವಿದ್ಯುದ್ದೀಕರಣಕ್ಕೆ – ರೂ.5 ಲಕ್ಷ ಜಮಾ
  • ಈ ಯೋಜನೆ ಅಲ್ಪಸಂಖ್ಯಾತ ಸಮುದಾಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾತ್ರ ಅನ್ವಯಿಸುತ್ತದೆ.

Free Borewell Scheme ಯೋಜನೆಯ ಉದ್ದೇಶ?

ಮಳೆಯ ಮೇಲೆ ಅವಲಂಬಿಸಿರುವ ಸಣ್ಣ ರೈತರಿಗೆ ನೀರಾವರಿಯ ಸೌಲಭ್ಯ ಒದಗಿಸುವುದೇ ಈ ಯೋಜನೆಯ ಮುಖ್ಯ ಗುರಿ. ಬೋರ್‌ವೆಲ್ ಅಥವಾ ತೆರೆದ ಬಾವಿ ನಿರ್ಮಾಣದ ಸಹಾಯದಿಂದ ಅವರು ಹೆಚ್ಚು ಬೆಳೆ ಬೆಳೆದು, ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.

ಅರ್ಹತಾ ಮಾನದಂಡಗಳು

  • ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
  • ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
  • ವಯಸ್ಸು 18 ರಿಂದ 55 ವರ್ಷಗಳೊಳಗಿರಬೇಕು.
  • ಸಣ್ಣ ಅಥವಾ ಅತಿಸಣ್ಣ ರೈತರಾಗಿರಬೇಕು.
  • ನಗರ ಪ್ರದೇಶದ ವಾರ್ಷಿಕ ಆದಾಯ ರೂ.1.3 ಲಕ್ಷ ಮೀರಬಾರದು.

ಅಗತ್ಯ ದಾಖಲೆಗಳು

  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • BPL ಪಡಿತರ ಚೀಟಿ
  • ಇತ್ತೀಚಿನ RTC ಪ್ರತಿಗಳು
  • ಭೂ ಕಂದಾಯ ಪಾವತಿ ರಶೀದಿ
  • ಸಣ್ಣ ರೈತರ ಪ್ರಮಾಣಪತ್ರ
  • ಸ್ವಯಂ ಘೋಷಣಾ ಪತ್ರ
  • ಯೋಜನೆ ವರದಿ

ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮಾಡಿ: https://sevasindhu.karnataka.gov.in/Sevasindhu/Kannada?ReturnUrl=%2F ಅರ್ಜಿ ನಮೂನೆಯನ್ನು ಮುದ್ರಿಸಿ. ಈ ಅರ್ಜಿ ನಮೂನೆಯನ್ನು ಇತರ ಸಂಬಂಧಿತ ದಾಖಲೆಗಳೊಂದಿಗೆ ನಿಮ್ಮ ಸಂಬಂಧಿತ ಜಿಲ್ಲೆಯ ಆಯ್ಕೆ ಸಮಿತಿಗೆ ಸಲ್ಲಿಸಿ.

ನಿಜವಾದ ಲಾಭ ಯಾರಿಗೆ?

ಈ ಯೋಜನೆಯಿಂದ ಸಾವಿರಾರು ಅಲ್ಪಸಂಖ್ಯಾತ ರೈತರಿಗೆ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಸಿಗುತ್ತದೆ. ಅದರಿಂದ ಬತ್ತಿದ ಜಮೀನುಗಳು ಮತ್ತೆ ಹಸಿರಾಗುತ್ತವೆ ಮತ್ತು ರೈತರ ಜೀವನಮಟ್ಟ ಮೇಲೇಳುತ್ತದೆ.

ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿ — ಅವರು ಸಹ ನಿಧಿಗಳ ಸಹಾಯದಿಂದ ತಮ್ಮ ಕೃಷಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು.

Krishna Bhat

ನಾನು ಕೃಷ್ಣ ಭಟ್ಟ, ಉದ್ಯೋಗಾವಕಾಶಗಳು, ಸರ್ಕಾರಿ ಉದ್ಯೋಗ ಅವಕಾಶಗಳು, ಪರೀಕ್ಷೆಯ ತಯಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸುದ್ದಿಗಳನ್ನು ನೀಡುವ ಉತ್ಸಾಹಭರಿತ ಬರಹಗಾರ. ಈ ಕುರಿತು ಆಳವಾದ ಅಧ್ಯಯನ ಮತ್ತು ಸಂಪೂರ್ಣ ಮಾಹಿತಿಯೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಾ ಬಂದಿದ್ದೇನೆ. ನಾನು ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Join WhatsApp

Join Now

Join Telegram

Join Now

Leave a comment